ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

ದಿನಾಂಕ: 25/10/2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ
ಪತ್ರಿಕಾ ಪ್ರಕಟಣೆ
ಸಿ.ಇ.ಎನ್ ಕ್ರೆö ಪೊಲೀಸ ಠಾಣೆ ಸ್ಥಳಾಂತರ ಮಾಹಿತಿ
------------------------------------------------------------

ಹುಬ್ಬಳ್ಳಿ-ಧಾರವಾಡ ನಗರದ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸೈಬರ್, ಆರ್ಥಿಕ & ಮಾದಕ ವಸ್ತುಗಳ ಅಪರಾಧ ಪೊಲೀಸ ಠಾಣೆಯು (ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆ) ಈ ಮೊದಲು ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುತಿತ್ತು. ಸದರ ಪೊಲೀಸ ಠಾಣೆಯನ್ನು ಘಂಟಿಕೇರಿ ಓಣಿಯಲ್ಲಿ ಹೊಸದಾಗಿ ನಿರ್ಮಿಸಿರುವ ದಕ್ಷಿಣ ಸಂಚಾರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಿಸಿರುತ್ತದೆ. ಕಾರಣ ಸೈಬರ್ ಮತ್ತು ಮಾದಕ ವಸ್ತುಗಳ ಅಪರಾಧಗಳಿಗೆ ಸಂಬAಧಿಸಿದAತೆ ದೂರು ನೀಡಲು ಘಂಟಿಕೇರಿ ಓಣಿಯ ದಕ್ಷಿಣ ಸಂಚಾರ ಪೊಲೀಸ ಠಾಣೆಯ 2ನೇ ಮಹಡಿಯ ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆಯಲ್ಲಿ ದೂರು ನೀಡಲು ಈ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದು ಇರುತ್ತದೆ.
ಠಾಣೆಯ ದೂರವಾಣಿ ಸಂಖ್ಯೆ: 0836-2233567
ಪೊಲೀಸ್ ಇನ್ಸಪೆಕ್ಟರ ದೂರವಾಣಿ ಸಂಖ್ಯೆ: 9480802042

16-09-2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್
- - - - - - - - - - - - - - - - - - - - - - - - - - - - - - - - - - - - - - - - - -
 
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ವಿಷಯಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದೇಶಗಳÀ/ರಾಜ್ಯಗಳ ವಿಡಿಯೋಗಳನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಆತಂಕಗೊAಡ ಸಾರ್ವಜನಿಕರು ಅಪರಿಚಿತ, ಅಮಾಯಕ ವ್ಯಕ್ತಿಗಳನ್ನು ತಡೆದು/ಹಿಡಿದು ಹಲ್ಲೆ ಮಾಡುತ್ತಿರುವÀ ಘಟನೆಗಳು ಬೆಳಕಿಗೆ ಬಂದಿರುತ್ತವೆ.
 
 ಆದ್ದರಿಂದ ಅವಳಿ ನಗರದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳತನದಂತಹ ಯಾವುದೇ ಘಟನೆಗಳು ಸಂಭವಿಸಿರುವುದಿಲ್ಲ. ನಾಗರಿಕರು ತಮ್ಮ ಬಡಾವಣೆ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡುವುದು, ಇದರಿಂದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಕೂಲಂಕುಶವಾಗಿ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಆತಂಕಗೊAಡು ಯಾವುದೇ ಕಾರಣಕ್ಕೂ ಅಮಾಯಕ ವ್ಯಕ್ತಿಗಳಿಗೆ ತಡೆಯೊಡ್ಡಿ ತೊಂದರೆ ಕೊಡುವುದಾಗಲಿ ಅಥವಾ ಹಲ್ಲೆ ಮಾಡುವುದಾಗಲಿ ಮಾಡಿದಲ್ಲಿ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
 
 ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

 06-08-2022

ಪೊಲೀಸ ಆಯುಕ್ತರ ಕಾರ್ಯಾಲಯ ಹುಬ್ಬಳ್ಳಿ-ಧಾರವಾಡ ನಗರ ಘಟಕ ಹಾಗೂ ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆ, ಕರ್ನಾಟಕ ಸರ್ಕಾರ

ಪತ್ರಿಕಾ ಪ್ರಕಟನೆ

ಸಂಚಾರ ಉಲ್ಲಂಘನೆ  ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ ಮೂಲಕ ಪಾವತಿಸುವ ಸೇವೆಯ ಆರಂಭ

            ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 13 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳು ನಗರದ ಆನಂದ ನಗರ, ಅಕ್ಷಯ ಪಾರ್ಕ್, ಬಾರಾಕೋಟ್ರಿ, ಗ್ಲಾಸ್ ಹೌಸ್,  ಐಟಿ ಪಾರ್ಕ್ ಕೂಟಾರಗೇರಿ ಓಣಿ, ಕಲಾಭವನ, ಕೇಶವಾಪುರ, ನವನಗರ, ಸಿದ್ದೇಶ್ವರ ನಗರ,  ಶ್ರೀರಾಮ್ ನಗರ , ವಿಜಯನಗರ,  ಮತ್ತು  ವೀರಾಪುರ ಓಣಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.

            ಹುಬ್ಬಳ್ಳಿ-ಧಾರವಾಡ ನಗರದ ನಾಗರಿಕರ ಅನುಕೂಲಕ್ಕಾಗಿ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸುವ ಸೇವೆಯನ್ನು ದಿನಾಂಕ 13.07.2022 ರಿಂದ ಕರ್ನಾಟಕ ಒನ್ ಕೇಂದ್ರಗಳಲ್ಲಿ/ವೆಬ್ ಸೈಟ್ ನಲ್ಲಿ ಪ್ರಾರಂಭಿಸಲಾಗಿದೆ. ಕರ್ನಾಟಕ ಒನ್ ಕೇಂದ್ರಗಳು ವರ್ಷದ ಎಲ್ಲಾ 365 ದಿನಗಳಂದು ಪ್ರತಿದಿನ ಬೆಳಗೆ 8.00 ರಿಂದ ಸಂಜೆ 7.00 ರವರೆಗೆ ಕಾರ್ಯನಿರ್ವಹಿಸುತ್ತವೆ. (ಕಾರ್ಮಿಕರ ದಿನಾಚರಣೆ, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಚುನಾವಣೆ ಮತ ಚಲಾಯಿಸುವ ದಿನ, ಗಾಂಧಿ ಜಯಂತಿ, ಮತ್ತು ಕನ್ನಡ ರಾಜ್ಯೋತ್ಸವ ಹೊರತುಪಡಿಸಿ) ನಾಗರಿಕರು ನಗದು/ಕ್ರೆಡಿಟ್/ಡೆಬಿಟ್ ಕಾರ್ಡ್/ ಪೇಟಿಎಂ/ಯುಪಿಐ ಮೂಲಕ ಪಾವತಿಸಬಹುದಾಗಿದೆ.

            ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ (www.karnatakaone.gov.in) ಮೂಲಕ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸಲು ಕೋರಲಾಗಿದೆ. ನಾಗರಿಕರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು.

  1. ಆನಂದ ನಗರ – 0836-2207934
  2. ಅಕ್ಷಯ ಪಾರ್ಕ್ – 0836-2335001
  3. ಬಾರಾಕೋಟ್ರಿ – 0836-2444099
  4. ಗ್ಲಾಸ್ ಹೌಸ್ – 0836-2362880
  5. ಐಟಿ ಪಾರ್ಕ್ – 0836-2970197
  6. ಕೊಟ್ರಗೇರಿ ಓಣಿ – 0836-2202788
  7. ಕಲಾಭವನ – 0836-2444098
  8. ಕೇಶವಾಪುರ – 0836-2280905
  9. ನವನಗರ – 0836-2224333
  10. ಸಿದ್ದೇಶ್ವರ ನಗರ – 0836-2371080
  11. ಶ್ರೀರಾಮ್ ನಗರ – 0836-2204949
  12. ವಿಜಯನಗರ         – 0836-2253332
  13. ವೀರಾಪುರ ಓಣಿ - 0836-2955959
 29-07-2022

ಹುಬ್ಬಳ್ಳಿ ಶಹರದ ಹೊಸೂರ, ವಾಣಿವಿಲಾಸ್ ಹನಮಂತದೇವರ ಗುಡಿ ಮುಂದಿನ ಸರ್ಕಲ್ ಮಧ್ಯದಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿ0ದ ದಿನಾಂಕ: 29/07/2022 ರ ಬೆಳಿಗ್ಗೆಯಿಂದ ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ಸಂಚಾರವನ್ನು ನಿಷೇಧಿಸಲಾಗಿದೆ. ಕಾರಣ ಹೊಸೂರ ಸರ್ಕಲ್‌ದಿಂದ ಎಡಕ್ಕೆ ತಿರುಗಿ ಜೋಶಿ ಆಸ್ಪತ್ರೆ ಮುಂದೆ ಹಾಯ್ದು ಗೋಕುಲ ರೋಡ ಕಡೆಗೆ ಹೋಗುವವರು ಲಕ್ಷಿö್ಮÃ ವೇ ಬ್ರೀಡ್ಜ, ಗ್ಲಾಸ್ ಹೌಸ್, ಗಿರಣಿ ಚಾಳ, ಎಂ. ಟಿ. ಮಿಲ್ಲ ಸರ್ಕಲ್, ವಾಣಿ ವಿಲಾಸ ಸರ್ಕಲ್‌ದಲ್ಲಿ ಎಡತಿರುವು ಪಡೆದುಕೊಂಡು ಗೋಕುಲ ರೋಡ ಕಡೆಗೆ ಹೋಗುವುದು.

25-05-2022

: ಪತ್ರಿಕಾ ಪ್ರಕಟಣೆ :

 

ದಿನಾಂಕ: 25/05/2022 ರ ಬೆಳಗಿನ ಜಾವದಿಂದ ಹುಬ್ಬಳ್ಳಿ ಶಹರದ ಹಳೇ ಬಸ್ಸ ನಿಲ್ದಾಣದ ಸಮೀಪ ಇರುವ ಬಸವ ವನ ಹತ್ತಿರದಿಂದ ಹೊಸೂರ ಸರ್ಕಲ್ ವರೆಗೆ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿAದ ಹಳೇ ಬಸ್ಸ ನಿಲ್ದಾಣದ ಮುಂದಿನ ಅಯೋದ್ಯಾ ಹೊಟೇಲ್ ಮುಂದೆ ಹಾಯ್ದು ವಿವಿಧ ಸ್ಥಳಗಳಿಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಚೆನ್ನಮ್ಮ ಸರ್ಕಲ್ ಮುಖಾಂತರ ಧಾರವಾಡ, ಗೋಕುಲ ರೋಡ, ಕಾರವಾರ ರೋಡ, ಬೆಳಗಾವಿ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಚೆನ್ನಮ್ಮ ಸರ್ಕಲ್, ಅಯೋಧ್ಯಾ ಹೊಟೇಲ್ ಮುಂದೆ, ಏಕುಮುಖ ರಸ್ತೆಯಲ್ಲಿ ಹಾಯ್ದು ಬಸವ ವನ ಕಾರ್ಪೋರೇಶನ್ ಬ್ಯಾಂಕ್ ಮುಂದೆ ಬಲತಿರುವ ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಗೋಕುಲ ರೋಡ, ಧಾರವಾಡ, ಬೆಳಗಾವಿ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಭಾರಿ ವಾಹನಗಳ ಸಂಚಾರವನ್ನು ಮಹಾದೇವ ಮಿಲ್ಲ, ವಾಣಿವಿಲಾಸ ಸರ್ಕಲ್, ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಲಿಜನ್ ರಸ್ತೆಯ ಮುಖಾಂತರ ಗದಗ ರೋಡ ಮತ್ತು ನವಲಗುಂದ ರೋಡ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಲಘು ವಾಹನಗಳು ಪೊಲೀಸ್ ಕ್ವಾಟರ‍್ಸ ಮುಂದೆ ಹಾಯ್ದು ಹಳೇ ಬಸ್ಸ ನಿಲ್ದಾಣ, ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೆ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 ಗೋಕುಲ ರೋಡ, ಹಳೇ ಪಿ ಬಿ ರೋಡ, ಧಾರವಾಡ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಜಿಲನ್ ರಸ್ತೆ ಮುಖಾಂತರ ಗದಗ, ನವಲಗುಂದ, ಬೆಂಗಳೂರ, ಕಾರವಾರ ಕಡೆಗೆ ಹೋಗುವುದು. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಕಾಟನ್ ಮಾರ್ಕೆಟ್, ಶಾರದಾ ಹೊಟೇಲ್ ರೋಟರಿ ಸ್ಕೂಲ ಮುಂದೆ ಹಾಯ್ದು ಹೋಗಬಹುದಾಗಿದೆ.

 ವಿಶ್ವೇಶ್ವರನಗರ, ವಿಜಯನಗರ, ದೇಶಪಾಂಡೆನಗರ ಕಡೆಯಿಂದ ಗೋಕುಲ ರೋಡ ಅಥವಾ ಧಾರವಾಡ ಕಡೆಗೆ ಹೋಗುವ ವಾಹನಗಳು ಶಾರಧಾ ಹೊಟೇಲ್ ಕ್ರಾಸ್ ಮುಖಾಂತರ ಕಾಟನ್ ಮಾರ್ಕೆಟ್, ಉತ್ತರ ಸಂಚಾರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಲಕ್ಷಿವೆ ಬ್ರೀಡ್ಜದಿಂದ ಬಲತಿರುವ ಪಡೆದು ಭಗತ್‌ಸಿಂಗ್ ಸರ್ಕಲ್, ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಹೋಗುವುದು.

 ಗಬ್ಬೂರ, ಬಂಕಾಪೂರ ಚೌಕ, ಹಳೇ ಪಿ. ಬಿ. ರಸ್ತೆಯ ಕಮರಿಪೇಟ್ ಮುಖಾಂತರ ಬರುವ ಎಲ್ಲಾ ವಾಹನಗಳು ಹಳೇ ಬಸ್ಸ ನಿಲ್ದಾಣ ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ ಮುಖಾಂತರ ಗೋಕುಲ ರೋಡ, ಧಾರವಾಡ ಕಡೆಗೆ ಹೋಗಬಹುದಾಗಿದೆ. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ಕಾಟನ್ ಮಾರ್ಕೆಟ್ ಮುಖಾಂತರ ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 

ಇತ್ತೀಚಿನ ನವೀಕರಣ​ : 03-11-2022 04:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080