ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

 27-06-2023

ದಿನಾಂಕ: 27/09/2023 ರಂದು 9 ನೇ ದಿವಸ ಹುಬ್ಬಳ್ಳಿ ನಗರದಲ್ಲಿ ಗಣೇಶ ವಿಸರ್ಜನೆ ಮಾಡುವ ಕಾಲಕ್ಕೆ ಸಾಯಂಕಾಲ 4-00 ಗಂಟೆಯಿ0ದ ಮರು ದಿವಸ ಮುಂಜಾನೆ 06-00 ಗಂಟೆಯವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ.

 

ವಾಹನಗಳ ಮಾರ್ಗ ಬದಲಾವಣೆ

 

ಗ್ರಾಮೀಣ ಭಾಗದಿಂದ ಬರುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗೋಕುಲ ರೋಡ & ಹಳೇ ಪಿ ಬಿ ರೋಡ ಮುಖಾಂತರ ಬಂದು ಗದಗ ರೋಡ & ನವಲಗುಂದ ರೋಡ ಕಡೆಗೆ ಹೋಗುವ ವಾಹನಗಳು- ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಉತ್ತರ ಸಂಚಾರ ಪೊಲೀಸ್ ಠಾಣೆ, ನೀಲಿಜನ್ ರೋಡ, ಕೆ ಸಿ ಸರ್ಕಲ್ ಎಡಕ್ಕೆ ಹೊರಳಿ ಕೋರ್ಟ ಸರ್ಕಲ್, ದೇಸಾಯಿ ಸರ್ಕಲ್ ಬ್ರೀಡ್ಜ ಮೇಲಿಂದ ಕೇಶ್ವಾಪೂರಕ್ಕೆ ಹೋಗಿ ಅಲ್ಲಿಂದ ಹೋಗುವುದು.

 

2 ಗದಗ ರೋಡ & ನವಲಗುಂದ ರೋಡ ಕಡೆಯಿಂದ ಬರುವ ಲಘು ವಾಹನಗಳು- ಗದಗ ರೋಡ ದಿಂದ ಬರುವ ಲಘು ವಾಹನಗಳು ಪಿಂಟೋ ಸರ್ಕಲ್, ಬಿ.ಎಸ್.ಎನ್.ಎಲ್ ಆಪೀಸ್, ದೇಸಾಯಿ ಸರ್ಕಲ್ ಅಂಡರ್ ಬ್ರೀಡ್ಜ, ಐ ಬಿ ಮುಂದೆ ಹಾಯ್ದು ಉತ್ತರ ಸಂಚಾರ ಠಾಣೆ ಲಕ್ಷಿö್ಮÃ ವೇ ಬ್ರೀಡ್ಜ, ಭಲಕ್ಕೆ ಹೊರಳಿ ಹೊಸೂರ ಹೋಗುವುದು. ನವಲಗುಂದ ರೋಡ ದಿಂದ ಬರುವ ಲಘು ವಾಹನಗಳು ಸರ್ವೋದಯ ಸರ್ಕಲ್, ಕೋರ್ಟ ಸರ್ಕಲ್, ಹುಬ್ಬಳ್ಳಿ ಸ್ಸಾö್ಯನ್ ಮುಂದೆ ಹಾಯ್ದು ಐ ಬಿ ಕ್ರಾಸ್ ದಿಂದ ಎಡಕ್ಕೆ ಹೊರಳಿ ಬೆಂಬಳಗಿ ಕ್ರಾಸ್, ಉತ್ತರ ಸಂಚಾರ ಠಾಣೆ ಲಕ್ಷಿö್ಮÃ ವೇ ಬ್ರೀಡ್ಜ, ಭಲಕ್ಕೆ ಹೊರಳಿ ಹೊಸೂರ ಹೋಗುವುದು.

3 ನವಲಗುಂದ & ಗದಗ ರೋಡ- ನವಲಗುಂದ ರೋಡ & ಗದಗ ರೋಡ ಕಡೆಯಿಂದ ಶಹರ ಪ್ರವೇಶಿಸಿ ಕಾರವಾರ ರೋಡ & ಗೋಕುಲ ರೋಡ ಹೋಗುವ ವಾಹನಗಳನ್ನು ಕಡ್ಡಾಯವಾಗಿ ರಿಂಗ್ ರೋಡ ಮುಖಾಂತರ ಕಳಿಸುವ ವ್ಯವಸ್ಥೆ ಮಾಡುವುದು.

4 ಬೆಂಗಳೂರು/ಕಾರವಾರ ರೋಡ ಕಡೆಯಿಂದ- ಬೆಂಗಳೂರು ಕಡೆಯಿಂದ ಹಾಗೂ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವಂತಹ ವಾಹನಗಳಿಗೆ ಇಂಡಿ ಪಂಪಗೆ ಹೋಗುವುದನ್ನು ನಿಷೇಧಿಸಿದ್ದು ಅಂತಹ ವಾಹನಗಳನ್ನು ಬೈಪಾಸ ಮುಖಾಂತರ ಹೋಗಿ ತಾರಿಹಾಳ ಇಂಟರ ಚೇಜ್ ಮುಖಾಂತರ ಗೋಕುಲ ರೋಡ, ಹೂಸೂರು ಬಸ್ಸ ನಿಲ್ದಾಣ ಪ್ರವೇಶಿಸಬಹುದು. ಬೈಪಾಸ ಮುಖಾಂತರವೇ ಹೋಗಬೇಕು.

5 ತಾರಿಹಾಳ ಬೈ ಪಾಸ್- ತಾರಿಹಾಳ ಬೈಪಾಸ್ ದಿಂದ ಶಹರ ಪ್ರವೇಶಿಸಿ ಗದಗ & ನವಲಗುಂದ ರೋಡ ಕಡೆಗೆ ವಾಹನಗಳನ್ನು ಸಹ ಬೈಪಾಸ್ ರಿಂಗ್ ರೋಡ ಮುಖಾಂತರ ಕಳಿಸುವುದು.

6 ಚಟ್ನಿಮಠ ಕ್ರಾಸ್- ಕಮರಿಪೇಟೆ ಪಿ.ಎಸ್ ಕಡೆಯಿಂದ ಬರುವ ವಾಹನಗಳಿಗೆ ಚನ್ನಪೇಟೆ ಐಸ್ ಪ್ಯಾಕ್ಟರಿ ಕಡೆಗೆ ಬಿಡದಂತೆ ನೋಡಿಕೊಳ್ಳಲಾಗುವುದು.

7 ಎಂ.ಟಿ. ಮಿಲ್ ಕ್ರಾಸ್- ಕಾರವಾರ ರೋಡ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಂಡು, ವಾಣಿ ವಿಲಾಸ ಕ್ರಾಸ್ ಮುಖಾಂತರ ಬಿಡಲಾಗುವುದು.

8 ವಾಣಿವಿಲಾಸ ಕ್ರಾಸ್- ಹೊಸೂರ ಮತ್ತು ಗೋಕುಲ್ ರೋಡ ಕಡೆಗೆ ಬಂದು ಕಾರವಾರ ರೋಡ ಕಡೆಗೆ ಹೋಗುವ ವಾಹನಗಳಿಗೆ ಗೋಕುಲ್ ರೋಡ ಬೈಪಾಸ ಮುಖಾಂತರ ಕಳುಹಿಸಲಾಗುವದು,

9 ಮಾಫ್ಸ್ಲ್ ಡಿಪೋ- ಲಿಂಗರಾಜನಗರ ಕಡೆಯಿಂದ ಮತ್ತು ಗೋಕುಲ್ ರೋಡ ಕಡೆಯಿಂದ ಬರುವ ಬಾರಿ ವಾಹನಗಳಿಗೆ ಹೆಗ್ಗೇರಿ ರೋಡ ಕಡೆಗೆ ಬಿಡದಂತೆ ಮಾರ್ಗ ಬದಲಾಯಿಸುವದು.

10 ಹೊಸೂರ ಸರ್ಕಲ್- ಹೊಸೂರ ಸರ್ಕಲ್ ದಿಂದ ಬೆಂಗಳೂರು, ಕಾರವಾರ, ಗೋವಾ ಕಡೆಗೆ ಹೋಗುವ ವಾಹನಗಳು ಗೋಕುಲ ರೋಡ ಮುಖಾಂತರ ತಾರಿಹಾಳ ಬೈಪಾಸ ಮುಖಾಂತರ ಸಂಚರಿಸುತ್ತೇವೆ.

11 ಲಕ್ಷ್ಮೀ ವೇ ಬ್ರೀಡ್ಜ- ಲಕ್ಷ್ಮೀ ವೇ ಬ್ರೀಡ್ಜದಲ್ಲಿ ಬ್ಯಾರಿಕೇಡ್ ಹಾಕಿ ಚೆನ್ನಮ್ಮ ಸರ್ಕಲ್ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು. ಲಕ್ಷ್ಮೀ ವೇ ಬ್ರೀಡ್ಜದಿಂದ ಗ್ಲಾಸ್ ಹೌಸ್ ಗಿರಣಿಚಾಳ ಕಡೆಗೆ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು.

12 ಚೆನ್ನಮ್ಮ ಸರ್ಕಲ್- ಚೆನ್ನಮ್ಮ ಸರ್ಕಲ್‌ದಿಂದ ಹಳೇ ಬಸ್ಸ ನಿಲ್ದಾಣದ ಮುಖಾಂತರ ಹೊಸುರ ಕಡೆಗೆ ಹೋಗುವ ಯಾವುದೇ ವಾಹನಗಳನ್ನು ಬಿಡದಂತೆ ನೋಡಿಕೊಳ್ಳುವುದು.

21-09-2023

ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ಆಚರಣೆ ನಿಮಿತ್ಯ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮುಂಜಾಗೃತಾ ಕ್ರಮವಾಗಿ ಮಧ್ಯ ಮಾರಾಟ ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ತಿದ್ದುಪಡಿ ಆದೇಶ ಹೊರಡಿಸುವ ಕುರಿತು

 21-09-2023

ವಾಹನಗಳ ಮಾರ್ಗ ಬದಲಾವಣೆ

ದಿನಾಂಕ: 21/09/2023 ರಂದು 3 ನೇ ದಿವಸ ಈದ್ಗಾ ಮೈದಾನದ ಗಣೇಶ ವಿಸರ್ಜನೆ ಮಾಡುವ ಕಾಲಕ್ಕೆ ಮುಂಜಾನೆ 11-00 ಗಂಟೆಯಿ0ದ ಸಾಯಂಕಾಲ 5-00 ಗಂಟೆಯವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ

ಗ್ರಾಮೀಣ ಭಾಗದಿಂದ ಬರುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗದಗ ಕಡೆಯಿಂದ: ಗದಗ ಕಡೆಯಿಂದ ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ಕೆ.ಎಸ್.ಆರ್.ಟಿಸಿ ಬಸ್ಸುಗಳು ಪಿಂಟೋ ಸರ್ಕಲ ಪಾಯಿಂಟದಲ್ಲಿ ನಿಲ್ಲಿಸಿ ಸಾರ್ವಜನಿಕರನ್ನು ಅಲ್ಲಿಯೇ ಬಸ್ಸಿನಿಂದ ಇಳಿಸಿ ಮರಳಿ ಗದಗ ರೋಡ ಮೂಲಕ ಸಂಚರಿಸಬೇಕು. ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ಇನ್ನಿತರೇ ವಾಹನಗಳನ್ನು ಪಿಂಟೋ ಸರ್ಕಲ ಮುಖಾಂತರ ದೇಸಾಯಿ ಕ್ರಾಸ್ ಮೂಲಕ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

2 ನವಲಗುಂದ ರೋಡ ಕಡೆಯಿಂದ: ನವಲಗುಂದ ಕಡೆಯಿಂದ ಬರುವ ಕೆ.ಎಸ್.ಆರ್.ಟಿಸಿ ಬಸ್ಸುಗಳು ಸರ್ವೋದಯ ಸರ್ಕಲದಲ್ಲಿ ನಿಲ್ಲಿಸಿ ಸಾರ್ವಜನಿಕರನ್ನು ಸರ್ವೋದಯ ಸರ್ಕಲದಲ್ಲಿ ಬಸ್ಸಿನಿಂದ ಇಳಿಸಿ ಮರಳಿ ನವಲಗುಂದ ಕಡೆಗೆ ಸಂಚರಿಸಬೇಕು. ಇನ್ನಿತರೇ ಹಾಗೂ ಪಿಂಟೋ ಸರ್ಕಲ್ ಕಡೆಯಿಂದ ಬರುವ ವಾಹನಗಳನ್ನು ಕಾಟನ್ ಮಾರ್ಕೇಟ ಮುಖಾಂತರ ಹಾಯ್ದು ಹೂಸೂರ ಸರ್ಕಲ್ ಕಡೆಗೆ ಬಿಡಲಾಗುವುದು. ಕಾಟನ್ ಮಾರ್ಕೇಟ ಕಡೆಯಿಂದ ದೇಸಾಯಿ ಕ್ರಾಸ್ ಬರುವ ವಾಹನಗಳನ್ನು ನವಲಗುಂದ ಕಡೆಗೆ ಕಳಿಸಲಾಗುವುದು.

3 ಕಾರವಾರ ರೋಡ ಕಡೆಯಿಂದ: ಕಾರವಾರ ರೋಡ ಕಡೆಯಿಂದ ಬರುವ ವಾಹನಗಳನ್ನು ಕಾರವಾರ ರೋಡ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರೋಡ ಮುಖಾಂತರ ಹೂಸೂರ ಸರ್ಕಲ್‌ಗೆ ಬಂದು ಸೇರಿ ಧಾರವಾಡ ಅಥವಾ ಕೆ.ಟಿ.ಸಿ ಕ್ರಾಸ್ ಮುಖಾಂತರ ನವಲಗುಂದ ಅಥವಾ ಗದಗ ಕಡೆಗೆ ಹೋಗಲು ಬಿಡಲಾಗುವುದು.

4 ಬೆಂಗಳೂರು ಹಾಗೂ ಗಬ್ಬೂರ ಕಡೆಯಿಂದ: ಬೆಂಗಳೂರು ಕಡೆಯಿಂದ ಧಾರವಾಡ ಕಡೆಗೆ ಹೋಗುವ ವಾಹನಗಳನ್ನು ಕಮರಿಪೇಟ ಪೊಲೀಸ ಠಾಣೆ ಹತ್ತಿರ ಎಡಗಡೆಯಿಂದ ತೋರವಿ ಹಕ್ಕಲ ಎಂ.ಟಿ.ಮಿಲ್, ವಾಣಿ ವಿಲಾಸ ಕ್ರಾಸ್ ಮುಖಾಂತರ ಹೂಸೂರ ಸರ್ಕಲ್‌ಗೆ ಬಂದು ಸೇರಿ ಅಲ್ಲಿಂದ ಧಾರವಾಡ ಕಡೆಗೆ ಹೋಗಲು ಬಿಡಲಾಗುವುದು.

 ದೂರದ ಊರಿಗೆ ಪ್ರಯಾಣ ಬೆಳಸುವ ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ಮಾರ್ಗ

1 ಗದಗ ಕಡೆಯಿಂದ: ಗದಗ ರೋಡ ದಿಂದ ಬರುವ ಬಸ್ಸುಗಳು ಹಾಗೂ ಗ್ರಾಮಾಂತರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್ಸುಗಳು ಕಡ್ಡಾಯವಾಗಿ ರಿಂಗ್ ರೋಡ ಮುಖಾಂತರ ಬಂದು ಗಬ್ಬೂರ ಬೈ ಪಾಸ್, ಕಾರವಾರ ರೋಡ ಅಥವಾ ತಾರಿಹಾಳ ಬೈ ಪಾಸ್ ಮೂಲಕ ಶಹರದ ಹೊಸುರ ಬಸ್ಸು ನಿಲ್ದಾಣಕ್ಕೆ ಬಂದು ತಲುಪುವುದು.

2 ನವಲಗುಂದ ರೋಡ ಕಡೆಯಿಂದ: ನವಲಗುಂದ, ಬಾಗಲಕೋಟ, ಬಿಜಾಪೂರ ಹಾಗೂ ಗ್ರಾಮಾಂತರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್ಸುಗಳು ಕಡ್ಡಾಯವಾಗಿ ಕುಸುಗಲ್ ಸಮೀಪ ಇರುವ ರಿಂಗ್ ರೋಡ ಮುಖಾಂತರ ಬಂದು ಗಬ್ಬೂರ ಬೈಪಾಸ್, ಕಾರವಾರ ರೋಡ ಅಥವಾ ತಾರಿಹಾಳ ಬೈ ಪಾಸ್ ಮೂಲಕ ಶಹರದ ಹೊಸುರ ಬಸ್ಸು ನಿಲ್ದಾಣಕ್ಕೆ ಬಂದು ತಲುಪುವುದು.

3 ಬೆಂಗಳೂರು/ಕಾರವಾರ ರೋಡ ಕಡೆಯಿಂದ: ಬೆಂಗಳೂರು ಕಡೆಯಿಂದ ಹಾಗೂ ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವಂತಹ ವಾಹನಗಳಿಗೆ ಇಂಡಿ ಪಂಪಗೆ ಹೋಗುವುದನ್ನು ನಿಷೇಧಿಸಿದ್ದು ಅಂತಹ ವಾಹನಗಳನ್ನು ಬೈಪಾಸ ಮುಖಾಂತರ ಹೋಗಿ ತಾರಿಹಾಳ ಇಂಟರ ಚೇಜ್ ಮುಖಾಂತರ ಗೋಕುಲ ರೋಡ, ಹೂಸೂರು ಬಸ್ಸ ನಿಲ್ದಾಣ ಪ್ರವೇಶಿಸಬಹುದು. ಬೈಪಾಸ ಮುಖಾಂತರವೇ ಹೋಗಬೇಕು.

ಇತರೇ ವಾಹನಗಳು ಶಹರದಲ್ಲಿ ಸಂಚರಿಸುವ ಮಾರ್ಗಗಳು

1 ಗದಗ ರೋಡ: ಗದಗ ಕಡೆಯಿಂದ ಮತ್ತು ರೇಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಚ್ ಪಾಟೀಲ ರೋಡ, ಡಿ.ಆರ್.ಎಂ ಕ್ರಾಸ್ ಮುಖಾಂತರ ದೇಸಾಯಿ ಸರ್ಕಲ್ ಅಂಡರ ಬ್ರೀಡ್ಜ ಮುಖಾಂತರ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

2 ನವಲಗುಂದ ರೋಡ: ನವಲಗುಂದ ಕಡೆಯಿಂದ ಬರುವ ವಾಹನಗಳನ್ನು ಸರ್ವೋದಯ ಸರ್ಕಲ್, ದೇಸಾಯಿ ಸರ್ಕಲ್ ಅಂಡರ ಬ್ರೀಡ್ಜ ಮುಖಾಂತರ ಹಾಯ್ದು ಕಾಟನ್ ಮಾರ್ಕೇಟ ಮುಖಾಂತರ ಲಕ್ಮೀ ವೇ ಬ್ರೀಜ್ ಹೂಸೂರ ಕ್ರಾಸ್‌ಗೆ ಬಂದು ಸೇರುವುದು.

3 ಬೆಂಗಳೂರ ರೋಡ/ ಕಾರವಾರ ರೋಡ: ಬೆಂಗಳೂರು ಕಡೆಯಿಂದ ಬರುವ ವಾಹನಗಳು ಹಾಗೂ ಕಾರವಾರ ರೋಡ ಕಡೆಯಿಂದ ಬರುವ ವಾಹನಗಳನ್ನು ಕಾರವಾರ ರೋಡ ಪ್ಲಾಜಾದಿಂದ ತಾರಿಹಾಳ ಮಾರ್ಗವಾಗಿ ಗೋಕುಲ ರೋಡ ಮುಖಾಂತರ ವಾಣಿ ವಿಲಾಸ ಕ್ರಾಸ್ ಮುಖಾಂತರ ಹೂಸೂರ ಬಸ್ಸ ನಿಲ್ದಾಣಕ್ಕೆ ಬಂದು ಸೇರುವುದು.

4 ಧಾರವಾಡ ರೋಡ: ಗೋಕುಲ ರೋಡ ಕಡೆಯಿಂದ, ಧಾರವಾಡ ಕಡೆಯಿಂದ ಬರುವ ವಾಹನಗಳು ಭಗತಸಿಂಗ್ ಸರ್ಕಲ್ ಮುಖಾಂತರ ಬಂದು ನಂತರ ದೇಸಾಯಿ ಅಂಡರ ಬ್ರೀಜ್ ಮಾರ್ಗವಾಗಿ ನವಲಗುಂದ ರೋಡ/ಗದಗ ರೋಡಗೆ ಸಂಪರ್ಕ ಕಲ್ಪಿಸಲಾಗಿದೆ.

5 ಹುಬ್ಬಳ್ಳಿ-ಧಾರವಾಡ ಮದ್ಯ ಸಂಚರಿಸುವ ಚಿಗರಿ ಬಸ್ಸುಗಳು ಬೇಂದ್ರ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಮಾತ್ರ: ಹುಬ್ಬಳ್ಳಿ-ಧಾರವಾಡ ಮದ್ಯ ಸಂಚರಿಸುವ ಬಸ್ಸುಗಳಿಗೆ ಹೂಸೂರು ಸರ್ಕಲ್ ಭಗತಸಿಂಗ ಸರ್ಕಲ್ ಸಂಸ್ಕೃತಿ ಭವನದ ರಸ್ತೆಯ ಮುಖಾಂತರ ಲಕ್ಷಿö್ಮÃ ವೇ ಬ್ರೀಜ್ ಹೂಸೂರು ಸರ್ಕಲ್ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ವ್ಯವಸ್ಥೇಯನ್ನು ಕಲ್ಪಿಸಲಾಗಿದೆ.

 ತಾತ್ಕಾಲಿಕ ಬಸ್ಸ ನಿಲ್ದಾಣಗಳ ವಿವರ

 ಕೆ.ಎಸ್.ಆರ್.ಟಿ.ಸಿ/ಖಾಸಗಿ ಬಸ್ಸುಗಳು ತಾತ್ಕಾಲಿಕ ಬಸ್ಸ ನಿಲ್ದಾಣಗಳು 1) ಗದಗ ರೋಡಗೆ –: ಗದಗ ರೋಡ ಅಂಡರ ಬ್ರೀಜ್ ಹತ್ತಿರ

2) ನವಲಗುಂದ ರೋಡಗೆ : ಸರ್ವೋದಯ ಸರ್ಕಲ್ ಹತ್ತಿರ.

3) ಬೆಂಗಳೂರು ರೋಡ : ಗಬ್ಬೂರು ಸರ್ಕಲ್.

4) ಧಾರವಾಡ ರೋಡ : ಹೂಸೂರು ಬಸ್ಸ ನಿಲ್ದಾಣ.

5) ಕಾರವಾರ ರೋಡ : ಕಾರವಾರ ರೋಡ ಅಂಡರ ಬ್ರೀಜ್

 20-09-2023

ಗಣೇಶ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮಳಿಗೆಗಳನ್ನು ದಿನಾಂಕ: 17-09-2023 ರಿಂದ 28-09-2023 ರ ವರೆಗೆ ಹುಬ್ಬಳ್ಳಿಯ ಕಲಾಭವನದ ಕಡಪಾ ಮೈದಾನ ಧಾರವಾಡಕ್ಕೆ ಸ್ಥಳಾಂತರಿಸುವ ಕುರಿತು

20-09-2023

ಗಣೇಶ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮಳಿಗೆಗಳನ್ನು ದಿನಾಂಕ: 17-09-2023 ರಿಂದ 23-09-2023 ರ ವರೆಗೆ ಹುಬ್ಬಳ್ಳಿಯ ನೇಹರೂ ಮೈದಾನಕ್ಕೆ ಸ್ಥಳಾಂತರಿಸುವ ಕುರಿತು

16-09-2023

03-09-2023

ಗಾಂಜಾ ಮಾರಾಟಗಾರನ ಗಡಿಪಾರು

ಹು-ಧಾ ನಗರ ವ್ಯಾಪ್ತಿಯಲ್ಲಿ ಸುಮಾರು ದಿನಗಳಿಂದ ಗಾಂಜಾ ಮಾರಾಟ ಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಯಲ್ಲಾಪುರ ಓಣಿ, ತತ್ತಿಪೂರ ಚಾಳದ ನಿವಾಸಿ 22 ವರ್ಷದ ಸಾಹಿಲ್ @ ಸಾಹಿಲ ಚಡ್ಡಾ ತಂದೆ ಮಹಮ್ಮದರಫೀಕ್ ನದಾಫ್, ಎಂಬಾತನನ್ನು ದಿನಾಂಕ 16.09.2023 ರಿಂದ 06 ತಿಂಗಳ ಅವಧಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಸಿ ಕಾಯ್ದೆಯಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಕೂಡ ಗಾಂಜಾ ಮಾರಾಟದ ತನ್ನ ವರಸೆ ಬಿಟ್ಟಿರಲಿಲ್ಲ. ಆದ್ದರಿಂದ ಈತನ ಮೇಲೆ ತೀವ್ರ ನಿಗಾ ಇಡಲಾಗಿತ್ತು.

ಹಳೇ ಚಾಳಿ ಮುಂದುವರೆಸಿದ್ದ ಈತ ಮತ್ತೆ ಗಾಂಜಾ ಮಾರಾಟ ಮಾಡುವ ವೇಳೆಯಲ್ಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆಗ ಸಿ.ಆರ್.ಪಿ.ಸಿ ಕಾಯ್ದೆಯ ಮುಚ್ಚಳಿಕೆ ಪತ್ರದನ್ವಯ 65,000/- ರೂ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ, ಆತನನ್ನು ನ್ಯಾಯಾಂಗ ಬಂಧನಕ್ಕೂ ಸಹ ಒಳಪಡಿಸಲಾಗಿತ್ತು.

ಜೈಲು ಶಿಕ್ಷೆ ಅನುಭವಿಸಿ ಹೊರಬಂದರೂ ಕೂಡ ತನ್ನ ಅಪರಾಧಿಕ ಪ್ರವೃತ್ತಿಯನ್ನು ಮುಂದುವರೆಸಿದ್ದರಿ0ದ ಈತನಿಗೆ ತಕ್ಕಪಾಠ ಕಲಿಸುವ ಉದ್ದೇಶದಿಂದ 06 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ.

 30-08-2023

ಗಡಿಪಾರು  ಆದೇಶ

ಮಾನ್ಯ ವಿಶೇಷ ಕಾರ್ಯಾನಿರ್ವಾಹಕ ದಂಡಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ರವರ ನ್ಯಾಯಾಲಯ ರವರ ಆದೇಶದ ಮೇರೆಗೆ ಮದನ @ ಮದ್ಯಾ ತಂದೆ ಚಂದ್ರಪ್ಪ ಬುಗಡಿ, ವಯಸ್ಸು: 3 ವರ್ಷ, ಉದ್ಯೋಗ: ಫೈನಾನ್ಸ್‌, ಸಾ: ಶಿವಶಂಕರ ಕಾಲನಿ, ಹಳೇ ಹುಬ್ಬಳ್ಳಿ ಎಂಬಾತನನ್ನು ದಿನಾಂಕ: 11-09-2023 ರಿಂದ 6 ತಿಂಗಳ ಅವಧಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಪೊಲೀಸ ಠಾಣೆಯ ವ್ಯಾಪ್ತಿಗೆ ಗಡಿಗಾರು ಮಾಡಲಾಗಿರುತ್ತದೆ.

ಸದರಿಯವನ ಮೇಲೆ ಕೊಲೆ, ಕೊಲೆಗೆ ಪ್ರಯತ್ನ, ಸುಲಿಗೆ, ಹಲ್ಲೆ, ಎಸ್‌ಸಿ ಎಸ್‌ಟಿ ದೌರ್ಜನ್ಯಗಳಂತಹ ಒಟ್ಟು 7 ಪ್ರಕರಣಗಳು ದಾಕಲಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ ಠಾಣೆಯಲ್ಲಿ ರೌಡಿ ಶೀಟ ಕೂಡ ತೆರೆಯಲಾಗಿದ್ದು, ಪದೆ. ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟುಮಾಡುವ ಪ್ರವೃತ್ತಿ ಹೊಂದಿರುವ ಈತನಿಗೆ ಮೇಲ್ಕಂಡ ಆದೇಶದಂತೆ 6 ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿರುತ್ತದೆ.

20-08-2023

ಗಡಿಪಾರು ಆದೇಶ

ಮಾನ್ಯ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ರವರ ನ್ಯಾಯಾಲಯ ರವರ ಆದೇಶದ ಮೇರೆಗೆ ಬಾಲರಾಜ @ ಬಾಲ್ಯಾ ತಂದೆ ರಾಮಣ್ಣ ದೊಡ್ಡಮನೆ, ವಯಸ್ಸು: 38 ವರ್ಷ, ಉದ್ಯೋಗ: ರಿಯಲ್ ಎಸ್ಟೇಟ್, ಸಾ: ನಂದೀಶ್ವರ ನಗರ, ನವನಗರ (ಹಾಲಿ: ಗಾಂಧಿ ನಗರ ಧಾರವಾಡ) ಎಂಬಾತನನ್ನು ದಿನಾಂಕ 19.08.2023 ರಂದು 06 ತಿಂಗಳ ಅವಧಿಗೆ ಬೀದರ ಜಿಲ್ಲೆಯ ಬೀದರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಸದರಿಯವನ ಮೇಲೆ ಜೀವ ಬೆದರಿಕೆ, ಮಾನಭಂಗ, ಹಲ್ಲೆ, ಅಪಹರಣ, ಕೊಲೆ ಬೆದರಿಕೆಗಳಂತಹ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಈಗಾಗಲೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ ಕೂಡ ತೆರೆಯಲಾಗಿರುತ್ತೆ. ಪದೇ ಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಪ್ರವೃತ್ತಿ ಹೊಂದಿರುವ ಈತನಿಗೆ ಮೇಲ್ಕಂಡ ಆದೇಶದಂತೆ 06 ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿರುತ್ತದೆ.

 

ದಿನಾಂಕ: 25/10/2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ
ಪತ್ರಿಕಾ ಪ್ರಕಟಣೆ
ಸಿ.ಇ.ಎನ್ ಕ್ರೆö ಪೊಲೀಸ ಠಾಣೆ ಸ್ಥಳಾಂತರ ಮಾಹಿತಿ
------------------------------------------------------------

ಹುಬ್ಬಳ್ಳಿ-ಧಾರವಾಡ ನಗರದ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸೈಬರ್, ಆರ್ಥಿಕ & ಮಾದಕ ವಸ್ತುಗಳ ಅಪರಾಧ ಪೊಲೀಸ ಠಾಣೆಯು (ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆ) ಈ ಮೊದಲು ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುತಿತ್ತು. ಸದರ ಪೊಲೀಸ ಠಾಣೆಯನ್ನು ಘಂಟಿಕೇರಿ ಓಣಿಯಲ್ಲಿ ಹೊಸದಾಗಿ ನಿರ್ಮಿಸಿರುವ ದಕ್ಷಿಣ ಸಂಚಾರ ಪೊಲೀಸ ಠಾಣೆಯ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಿಸಿರುತ್ತದೆ. ಕಾರಣ ಸೈಬರ್ ಮತ್ತು ಮಾದಕ ವಸ್ತುಗಳ ಅಪರಾಧಗಳಿಗೆ ಸಂಬAಧಿಸಿದAತೆ ದೂರು ನೀಡಲು ಘಂಟಿಕೇರಿ ಓಣಿಯ ದಕ್ಷಿಣ ಸಂಚಾರ ಪೊಲೀಸ ಠಾಣೆಯ 2ನೇ ಮಹಡಿಯ ಸಿ.ಇ.ಎನ್ ಕ್ರೆöÊಂ ಪೊಲೀಸ ಠಾಣೆಯಲ್ಲಿ ದೂರು ನೀಡಲು ಈ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದು ಇರುತ್ತದೆ.
ಠಾಣೆಯ ದೂರವಾಣಿ ಸಂಖ್ಯೆ: 0836-2233567
ಪೊಲೀಸ್ ಇನ್ಸಪೆಕ್ಟರ ದೂರವಾಣಿ ಸಂಖ್ಯೆ: 9480802042

16-09-2022

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್
- - - - - - - - - - - - - - - - - - - - - - - - - - - - - - - - - - - - - - - - - -
 
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ವಿಷಯಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದೇಶಗಳÀ/ರಾಜ್ಯಗಳ ವಿಡಿಯೋಗಳನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಆತಂಕಗೊAಡ ಸಾರ್ವಜನಿಕರು ಅಪರಿಚಿತ, ಅಮಾಯಕ ವ್ಯಕ್ತಿಗಳನ್ನು ತಡೆದು/ಹಿಡಿದು ಹಲ್ಲೆ ಮಾಡುತ್ತಿರುವÀ ಘಟನೆಗಳು ಬೆಳಕಿಗೆ ಬಂದಿರುತ್ತವೆ.
 
 ಆದ್ದರಿಂದ ಅವಳಿ ನಗರದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳತನದಂತಹ ಯಾವುದೇ ಘಟನೆಗಳು ಸಂಭವಿಸಿರುವುದಿಲ್ಲ. ನಾಗರಿಕರು ತಮ್ಮ ಬಡಾವಣೆ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ತುರ್ತು ಸಹಾಯವಾಣಿಗೆ ಕರೆ ಮಾಡುವುದು, ಇದರಿಂದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಕೂಲಂಕುಶವಾಗಿ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಆತಂಕಗೊAಡು ಯಾವುದೇ ಕಾರಣಕ್ಕೂ ಅಮಾಯಕ ವ್ಯಕ್ತಿಗಳಿಗೆ ತಡೆಯೊಡ್ಡಿ ತೊಂದರೆ ಕೊಡುವುದಾಗಲಿ ಅಥವಾ ಹಲ್ಲೆ ಮಾಡುವುದಾಗಲಿ ಮಾಡಿದಲ್ಲಿ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
 
 ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

 06-08-2022

ಪೊಲೀಸ ಆಯುಕ್ತರ ಕಾರ್ಯಾಲಯ ಹುಬ್ಬಳ್ಳಿ-ಧಾರವಾಡ ನಗರ ಘಟಕ ಹಾಗೂ ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆ, ಕರ್ನಾಟಕ ಸರ್ಕಾರ

ಪತ್ರಿಕಾ ಪ್ರಕಟನೆ

ಸಂಚಾರ ಉಲ್ಲಂಘನೆ  ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ ಮೂಲಕ ಪಾವತಿಸುವ ಸೇವೆಯ ಆರಂಭ

            ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 13 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳು ನಗರದ ಆನಂದ ನಗರ, ಅಕ್ಷಯ ಪಾರ್ಕ್, ಬಾರಾಕೋಟ್ರಿ, ಗ್ಲಾಸ್ ಹೌಸ್,  ಐಟಿ ಪಾರ್ಕ್ ಕೂಟಾರಗೇರಿ ಓಣಿ, ಕಲಾಭವನ, ಕೇಶವಾಪುರ, ನವನಗರ, ಸಿದ್ದೇಶ್ವರ ನಗರ,  ಶ್ರೀರಾಮ್ ನಗರ , ವಿಜಯನಗರ,  ಮತ್ತು  ವೀರಾಪುರ ಓಣಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.

            ಹುಬ್ಬಳ್ಳಿ-ಧಾರವಾಡ ನಗರದ ನಾಗರಿಕರ ಅನುಕೂಲಕ್ಕಾಗಿ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸುವ ಸೇವೆಯನ್ನು ದಿನಾಂಕ 13.07.2022 ರಿಂದ ಕರ್ನಾಟಕ ಒನ್ ಕೇಂದ್ರಗಳಲ್ಲಿ/ವೆಬ್ ಸೈಟ್ ನಲ್ಲಿ ಪ್ರಾರಂಭಿಸಲಾಗಿದೆ. ಕರ್ನಾಟಕ ಒನ್ ಕೇಂದ್ರಗಳು ವರ್ಷದ ಎಲ್ಲಾ 365 ದಿನಗಳಂದು ಪ್ರತಿದಿನ ಬೆಳಗೆ 8.00 ರಿಂದ ಸಂಜೆ 7.00 ರವರೆಗೆ ಕಾರ್ಯನಿರ್ವಹಿಸುತ್ತವೆ. (ಕಾರ್ಮಿಕರ ದಿನಾಚರಣೆ, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಚುನಾವಣೆ ಮತ ಚಲಾಯಿಸುವ ದಿನ, ಗಾಂಧಿ ಜಯಂತಿ, ಮತ್ತು ಕನ್ನಡ ರಾಜ್ಯೋತ್ಸವ ಹೊರತುಪಡಿಸಿ) ನಾಗರಿಕರು ನಗದು/ಕ್ರೆಡಿಟ್/ಡೆಬಿಟ್ ಕಾರ್ಡ್/ ಪೇಟಿಎಂ/ಯುಪಿಐ ಮೂಲಕ ಪಾವತಿಸಬಹುದಾಗಿದೆ.

            ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರಗಳ/ ವೆಬ್ ಸೈಟ್ (www.karnatakaone.gov.in) ಮೂಲಕ ಸಂಚಾರ ಉಲ್ಲಂಘನೆ ದಂಡ ಮತ್ತು ಪಾರ್ಕಿಂಗ್ ಉಲ್ಲಂಘನೆ ದಂಡದ ಸಂಗ್ರಹದ ಶುಲ್ಕವನ್ನು ಪಾವತಿಸಲು ಕೋರಲಾಗಿದೆ. ನಾಗರಿಕರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು.

  1. ಆನಂದ ನಗರ – 0836-2207934
  2. ಅಕ್ಷಯ ಪಾರ್ಕ್ – 0836-2335001
  3. ಬಾರಾಕೋಟ್ರಿ – 0836-2444099
  4. ಗ್ಲಾಸ್ ಹೌಸ್ – 0836-2362880
  5. ಐಟಿ ಪಾರ್ಕ್ – 0836-2970197
  6. ಕೊಟ್ರಗೇರಿ ಓಣಿ – 0836-2202788
  7. ಕಲಾಭವನ – 0836-2444098
  8. ಕೇಶವಾಪುರ – 0836-2280905
  9. ನವನಗರ – 0836-2224333
  10. ಸಿದ್ದೇಶ್ವರ ನಗರ – 0836-2371080
  11. ಶ್ರೀರಾಮ್ ನಗರ – 0836-2204949
  12. ವಿಜಯನಗರ         – 0836-2253332
  13. ವೀರಾಪುರ ಓಣಿ - 0836-2955959
 29-07-2022

ಹುಬ್ಬಳ್ಳಿ ಶಹರದ ಹೊಸೂರ, ವಾಣಿವಿಲಾಸ್ ಹನಮಂತದೇವರ ಗುಡಿ ಮುಂದಿನ ಸರ್ಕಲ್ ಮಧ್ಯದಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿ0ದ ದಿನಾಂಕ: 29/07/2022 ರ ಬೆಳಿಗ್ಗೆಯಿಂದ ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಹೊಸೂರ ಸರ್ಕಲ್‌ದಿಂದ ಗೋಕುಲ ರೋಡಗೆ ಹೋಗುವ ಸಂಚಾರವನ್ನು ನಿಷೇಧಿಸಲಾಗಿದೆ. ಕಾರಣ ಹೊಸೂರ ಸರ್ಕಲ್‌ದಿಂದ ಎಡಕ್ಕೆ ತಿರುಗಿ ಜೋಶಿ ಆಸ್ಪತ್ರೆ ಮುಂದೆ ಹಾಯ್ದು ಗೋಕುಲ ರೋಡ ಕಡೆಗೆ ಹೋಗುವವರು ಲಕ್ಷಿö್ಮÃ ವೇ ಬ್ರೀಡ್ಜ, ಗ್ಲಾಸ್ ಹೌಸ್, ಗಿರಣಿ ಚಾಳ, ಎಂ. ಟಿ. ಮಿಲ್ಲ ಸರ್ಕಲ್, ವಾಣಿ ವಿಲಾಸ ಸರ್ಕಲ್‌ದಲ್ಲಿ ಎಡತಿರುವು ಪಡೆದುಕೊಂಡು ಗೋಕುಲ ರೋಡ ಕಡೆಗೆ ಹೋಗುವುದು.

25-05-2022

: ಪತ್ರಿಕಾ ಪ್ರಕಟಣೆ :

ದಿನಾಂಕ: 25/05/2022 ರ ಬೆಳಗಿನ ಜಾವದಿಂದ ಹುಬ್ಬಳ್ಳಿ ಶಹರದ ಹಳೇ ಬಸ್ಸ ನಿಲ್ದಾಣದ ಸಮೀಪ ಇರುವ ಬಸವ ವನ ಹತ್ತಿರದಿಂದ ಹೊಸೂರ ಸರ್ಕಲ್ ವರೆಗೆ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿರುವದರಿAದ ಹಳೇ ಬಸ್ಸ ನಿಲ್ದಾಣದ ಮುಂದಿನ ಅಯೋದ್ಯಾ ಹೊಟೇಲ್ ಮುಂದೆ ಹಾಯ್ದು ವಿವಿಧ ಸ್ಥಳಗಳಿಗೆ ಹೋಗುವ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.

 ಚೆನ್ನಮ್ಮ ಸರ್ಕಲ್ ಮುಖಾಂತರ ಧಾರವಾಡ, ಗೋಕುಲ ರೋಡ, ಕಾರವಾರ ರೋಡ, ಬೆಳಗಾವಿ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಚೆನ್ನಮ್ಮ ಸರ್ಕಲ್, ಅಯೋಧ್ಯಾ ಹೊಟೇಲ್ ಮುಂದೆ, ಏಕುಮುಖ ರಸ್ತೆಯಲ್ಲಿ ಹಾಯ್ದು ಬಸವ ವನ ಕಾರ್ಪೋರೇಶನ್ ಬ್ಯಾಂಕ್ ಮುಂದೆ ಬಲತಿರುವ ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಗೋಕುಲ ರೋಡ, ಧಾರವಾಡ, ಬೆಳಗಾವಿ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಭಾರಿ ವಾಹನಗಳ ಸಂಚಾರವನ್ನು ಮಹಾದೇವ ಮಿಲ್ಲ, ವಾಣಿವಿಲಾಸ ಸರ್ಕಲ್, ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಲಿಜನ್ ರಸ್ತೆಯ ಮುಖಾಂತರ ಗದಗ ರೋಡ ಮತ್ತು ನವಲಗುಂದ ರೋಡ ಕಡೆಗೆ ಹೋಗುವುದು.

 ಕಾರವಾರ ರೋಡ ಕಡೆಯಿಂದ ಬರುವ ಲಘು ವಾಹನಗಳು ಪೊಲೀಸ್ ಕ್ವಾಟರ‍್ಸ ಮುಂದೆ ಹಾಯ್ದು ಹಳೇ ಬಸ್ಸ ನಿಲ್ದಾಣ, ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೆ ಬ್ರೀಡ್ಜ, ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 ಗೋಕುಲ ರೋಡ, ಹಳೇ ಪಿ ಬಿ ರೋಡ, ಧಾರವಾಡ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಕಾಟನ್ ಮಾರ್ಕೆಟ್ ರಸ್ತೆ, ಟ್ರಾಫೀಕ್ ಪೊಲೀಸ್ ಠಾಣೆಯ ಮುಂದೆ ಹಾಯ್ದು ನೀಜಿಲನ್ ರಸ್ತೆ ಮುಖಾಂತರ ಗದಗ, ನವಲಗುಂದ, ಬೆಂಗಳೂರ, ಕಾರವಾರ ಕಡೆಗೆ ಹೋಗುವುದು. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಕಾಟನ್ ಮಾರ್ಕೆಟ್, ಶಾರದಾ ಹೊಟೇಲ್ ರೋಟರಿ ಸ್ಕೂಲ ಮುಂದೆ ಹಾಯ್ದು ಹೋಗಬಹುದಾಗಿದೆ.

 ವಿಶ್ವೇಶ್ವರನಗರ, ವಿಜಯನಗರ, ದೇಶಪಾಂಡೆನಗರ ಕಡೆಯಿಂದ ಗೋಕುಲ ರೋಡ ಅಥವಾ ಧಾರವಾಡ ಕಡೆಗೆ ಹೋಗುವ ವಾಹನಗಳು ಶಾರಧಾ ಹೊಟೇಲ್ ಕ್ರಾಸ್ ಮುಖಾಂತರ ಕಾಟನ್ ಮಾರ್ಕೆಟ್, ಉತ್ತರ ಸಂಚಾರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಲಕ್ಷಿವೆ ಬ್ರೀಡ್ಜದಿಂದ ಬಲತಿರುವ ಪಡೆದು ಭಗತ್‌ಸಿಂಗ್ ಸರ್ಕಲ್, ಹೊಸೂರ ಗಾಳಿ ದುರ್ಗಮ್ಮನ ಗುಡಿ ಮುಂದೆ ಹಾಯ್ದು ಹೋಗುವುದು.

 ಗಬ್ಬೂರ, ಬಂಕಾಪೂರ ಚೌಕ, ಹಳೇ ಪಿ. ಬಿ. ರಸ್ತೆಯ ಕಮರಿಪೇಟ್ ಮುಖಾಂತರ ಬರುವ ಎಲ್ಲಾ ವಾಹನಗಳು ಹಳೇ ಬಸ್ಸ ನಿಲ್ದಾಣ ಬಸವ ವನದಿಂದ ಬಲತಿರುವು ಪಡೆದುಕೊಂಡು ಲಕ್ಷಿö್ಮÃ ವೇ ಬ್ರೀಡ್ಜ ಮುಖಾಂತರ ಗೋಕುಲ ರೋಡ, ಧಾರವಾಡ ಕಡೆಗೆ ಹೋಗಬಹುದಾಗಿದೆ. ದೇಶಪಾಂಡೆನಗರ ಕಡೆಗೆ ಹೋಗುವ ವಾಹನಗಳು ಭಗತ್‌ಸಿಂಗ್ ಸರ್ಕಲ್ ಬಲತಿರುವು ಪಡೆದುಕೊಂಡು ಕಾಟನ್ ಮಾರ್ಕೆಟ್ ಮುಖಾಂತರ ದೇಶಪಾಂಡೆನಗರ ಕಡೆಗೆ ಹಾಗೂ ಗದಗ ನವಲಗುಂದ ರೋಡ ಕಡೆಗೆ ಹೋಗಬಹುದಾಗಿದೆ.

 

ಇತ್ತೀಚಿನ ನವೀಕರಣ​ : 27-09-2023 11:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080